Wednesday, 08 May, 2024

Category: ಸರಸ್ವತಿ

ಅಂಕಣ ಬರಹ


ಭಾರತವೊಂದು ವೈವಿಧ್ಯತೆಯ ಸಾಗರ. “Unity in diversity”, “ಭಾರತವೊಂದು ದೇಶವಲ್ಲ-ಬದಲಿಗೆ ಒಂದುಉಪಖಂಡ” ಮುಂತಾದ ಸಾಲುಗಳನ್ನ ನಾವು ಕೇಳುತ್ತಲೇ ಇರುತ್ತೇವೆ. ಚಿಕ್ಕವರಿದ್ದಾಗಲಿಂದ ಪ್ರತಿಪಠ್ಯಪುಸ್ತಕದಲ್ಲೂ ಅದನ್ನೇ ನಮಗೆ ಹೇಳಿಕೊಡಲಾಗುತ್ತದೆ. ಬೆಳೆಯುತ್ತಾ ಪ್ರತಿಯೊಂದು ಪಾಠ, ಕಾರ್ಯಕ್ರಮ, ಲೇಖನಗಳಲ್ಲೇ ಅದನ್ನೇ ತಲೆಗೆ ತುಂಬಿ, ಅದರ ಮೂಲಕ ಸೌಹಾರ್ದತೆಯ ಪಾಠಗಳನ್ನು ಕಲಿಸಲಾಗುತ್ತದೆ. ಆದರೆ ಇಂದಿಗೂ ಎಷ್ಟೋ ಜನರಿಗೆ ಅಸಮಾನತೆ ಮತ್ತು ವೈವಿಧ್ಯತೆ/ವಿಭಿನ್ನತೆಗಳ ನಡುವಿನ Read more…


ಸಮಾಜ ಮತ್ತು ದೇಶವೊಂದು ಮುಂದುವರೆಯಬೇಕಾದರೆ ಕೇವಲ ನಾಯಕ, ಸರ್ಕಾರಗಳು ಮಾತ್ರ ಆದರ್ಶರೀತಿಯಲ್ಲಿದ್ದರೆ ಸಾಲದು. ಅವು ಯಾರಿಗಾಗಿ ರಚಿಸಲ್ಪಟ್ಟಿವೆಯೋ ಆ ಪ್ರಜೆಗಳೂ ಅವರೂ ಆದರ್ಶಗುಣಗಳನ್ನು ಹೊಂದಿರಬೇಕು. ಆದರ್ಶ ನಾಯಕನಿಗೆ ಹೇಗೆ ಗುಣಲಕ್ಷಣಗಳಿವೆಯೋ, ಆದರ್ಶ ಪ್ರಜೆಗೂ ಹಾಗೆಯೇ ಕೆಲ ಗುಣಲಕ್ಷಣಗಳಿವೆ. ಮತ್ತೀ ಗುಣಲಕ್ಷಣಗಳು ಶತಮಾನಗಳ ಕಾಲದಿಂದ, ಹತ್ತಾರು ನಾಗರೀಕತೆಗಳು ಕಲಿತ ಪಾಠದ ಮೂಲಕ ವಿಕಸನಗೊಳ್ಳುತ್ತಾ ಗಟ್ಟಿಯಾಗಿ ರೂಪುಗೊಂಡಿವೆ. ಒಬ್ಬ Read more…


ಚುನಾವಣೆಗಳು ಹೊಸ್ತಿಲಲ್ಲಿವೆ. ಪ್ರತಿ ಚುನಾವಣೆ ಬಂದಾಗಲೂ ರಾಜಕೀಯ ಪಕ್ಷಗಳು ತಮ್ಮದೊಂದು ಪ್ರಣಾಳಿಕೆಯನ್ನು ಬಿಡುಗಡೆ ಮಾಡುವುದನ್ನ ನಾವು ನೋಡಿಯೇ ಇದ್ದೇವೆ. ಕಳೆದ ಶತಮಾನಕ್ಕೆ ಹೋಲಿಸಿದರೆ, ಈ ಶತಮಾನದ ಚುನಾವಣೆಗಳಲ್ಲಿ ಇದೊಂದು ಧನಾತ್ಮಕ ಬೆಳವಣಿಗೆ. ಮೊದಲು ಬರೀ ಆಶ್ವಾಸನೆಗಳು ಬಾಯಿಮಾತಿನಲ್ಲಿರುತ್ತಿದ್ದವು. ಪ್ರಜೆಗಳು ಬುದ್ಧಿವಂತರಾದಂತೆಲ್ಲಾ ನಿಧಾನಕ್ಕೆ ಈ ಆಶ್ವಾಸನೆಗಳು ಅಕ್ಷರರೂಪಕ್ಕಿಳಿದು, ಪ್ರಣಾಳಿಕೆಯ ರೂಪ ಪಡೆದುಕೊಂಡವು. ಆದರೆ ಚುನಾವಣೆಗೆ ಮುನ್ನ ಆಶ್ವಾಸನೆಗಳ Read more…


ಅವ ರುಕ್ಮಿಣಿಗೂ ಕೃಷ್ಣನಾದ. ರಾಧೆಗೂ ಕೃಷ್ಣನಾದ. ರುಕ್ಮಿಣಿಯನ್ನು, ಅವಳ ಬಯಕೆಗಳನ್ನೂ, ರುಕ್ಮಿಣಿಯೊಂದಿಗಿನ ಕೃಷ್ಣನನ್ನು ಹೋಗೋ ಅರ್ಥೈಸಿಕೊಂಡುಬಿಡಬಹುದು. ಯಾಕೆಂದರೆ ನಾವೆಲ್ಲರೂ ರುಕ್ಮಿಣಿಯ ಕೃಷ್ಣರೇ. ಆದರೆ ರಾಧಾಕೃಷ್ಣನನ್ನು ಅರ್ಥೈಸಿಕೊಳ್ಳುವಾಗ ಹೆಚ್ಚಿನ ಹಿಡಿತಬೇಕು, ಜಗತ್ತು ಅರ್ಥವಾಗಬೇಕು, ಸಂಬಂಧಗಳು ಮನಸ್ಸನ್ನು ತಾಕಬೇಕು. ಇಲ್ಲವಾದಲ್ಲಿ ಕೈಲಾಗದತನವನ್ನೋ, ಲಂಪಟತನವನ್ನೋ ಸಮರ್ಥಿಸಿಕೊಂಡಂತಾಗುತ್ತದೆ.   ಕೃಷ್ಣ ಎಂದರೆ ಏನೋ ಸೆಳೆತ, ಸಂಭ್ರಮ, ಗದ್ದಲ, ಸಂತೋಷ, ಆತ್ಮೀಯತೆ, ನಮ್ಮವನೆಂಬ Read more…


2010ರಲ್ಲಿ ನಾನು ನಮ್ಮ ಕಂಪನಿಯ ಏರೋಸ್ಪೇಸ್ ಟೀಮ್’ನಲ್ಲಿ HR ಆಗಿದ್ದೆ. ಎಪ್ಪತ್ತು ಜನರ ಸಣ್ಣ ಟೀಮು, ಆದ್ರೆ ರೋಲ್ಸ್-ರಾಯ್ಸ್ ಮತ್ತು ಏರ್ಬಸ್ಸಿಂದ ಬಹಳಾ ದೊಡ್ಡ ಸರ್ಟಿಫಿಕೇಷನ್ ಆರ್ಡರ್ ಸಿಕ್ಕಿತ್ತು. ಟೀಮ್ ಡಬಲ್ ಆಗುವ ಅಗತ್ಯವಿತ್ತು. ಹೊಸಾ ಗ್ರಾಜುಯೇಟುಗಳನ್ನ ಹೈರ್ ಮಾಡೋಕೆ ತಿರುಗಾಡ್ತಾ ಇದ್ವಿ. ಲೀಡ್ಸ್ ಯೂನಿವರ್ಸಿಟಿಯಲ್ಲಿದ್ವಿ. ನನ್ನ ಜೊತೆಯಲ್ಲಿದ್ದ ಏರೋಸ್ಪೇಸ್ ಚೀಫ್ ಎಂಜಿನಿಯರ್ ಆಂಡಿ ಮಹಾನ್ Read more…


ಒಂದು ವಿಷ್ಯ ಯೋಚನೆ ಮಾಡಿ.   ನಿಮಗೆ ನಿಮ್ಮ ಬಾಸ್ “ನಾಳೆ ಶುಕ್ರವಾರ ಬೆಳಿಗ್ಗೆ ಎಂಟಕ್ಕೆ, ಅಥವಾ ಒಂಬತ್ತಕ್ಕೆ ಆಫೀಸಲ್ಲಿ ಇರಬೇಕು, ಒಂದು ಕೆಲಸ ಇದೆ” ಅಂದ್ರೆ, ನೀವು ಆ ಟೈಮಿಗೆ ಕರೆಕ್ಟಾಗಿ ಅಲ್ಲಿ ಇರ್ತೀರಿ ಅಲ್ವಾ? ಹೋಗ್ಲಿ, ಇನ್ನೂ ಕರೋನಾಶಕೆ ಮುಗಿದಿಲ್ಲ, ಆಫೀಸಿಗೆ ಹೋಗಲಿಕ್ಕಿಲ್ಲ ಮನೆಯಿಂದಲೇ ಕೆಲ್ಸ ಅಂತೀರಾ. ನಿಮ್ಮ ಕ್ಲೈಂಟ್ “ನಾಳೆ ಮಧ್ಯಾಹ್ನ Read more…


ಭಾರತದಲ್ಲಿ ದಲಿತರ ಶೋಷಣೆ ನಡೆದಂತೆಯೇ ಅಮೇರಿಕಾದಲ್ಲಿ ಬಿಳಿಯರಲ್ಲದವರೆಲ್ಲರ ಮೇಲೂ ಶೋಷಣೆ ನಡೆದಿತ್ತು. ಈಗಲೂ ನಡೆಯುತ್ತಿದೆ ಕೂಡಾ. ಮೊದಲಿನಂತೆ ಅಲ್ಲ, ಆದರೆ ಶೋಷಣೆ ಬೇರೆ ಬೇರೆಯ ಸ್ವರೂಪಗಳನ್ನು ಪಡೆದು ಈಗಲೂ ನಡೆಯುತ್ತಿದೆ. ಕೆಲಸಕ್ಕೆ ಅರ್ಜಿ ಹಾಕಿದರೆ ಪ್ರತಿಭೆ ಎಷ್ಟೇ ಇದ್ದರೂ ಚರ್ಮದ ಬಣ್ಣ, ಇಂಗ್ಳಿಷಿನ ಉಚ್ಛಾರ, ಯಾವ ಕಾಲೇಜಿನಿಂದ ಓದಿದ್ದು ಮುಂತಾದವನ್ನು ನೋಡಿ ಕೆಲ ಅರ್ಜಿಗಳನ್ನು ತಿರಸ್ಕರಿಸುವುದುಂಟು. Read more…


ಸಾವನ್ನು ಎದುರಿಸುವುದು ಸುಲಭವಲ್ಲ. ನಮಗೆ ಸಾವನ್ನು ಎದುರಿಸುವುದು ಎಂದಕ್ಷಣ ಸೈನಿಕನ ನೆನಪಾಗುತ್ತದೆ. ಸೈನ್ಯಕ್ಕೆ ಸೇರುವವರೆಲ್ಲರೂ ಯುದ್ಧಕ್ಕೆ ಹೋಗದಿರಬಹುದು, ಯುದ್ಧಕ್ಕೆ ಹೋದವರೆಲ್ಲರೂ ಸಾಯದಿರಬಹುದು. ಆದರೆ ಸೈನ್ಯದಲ್ಲಿ ಇದ್ದಮೇಲೆ ಸಾವು ಎನ್ನುವುದು ಅನೂಹ್ಯವೇ. ಯಾವತ್ತು ಎಲ್ಲಿಂದ ಹೇಗೆ ಬರಬಹುದೆಂಬುದನ್ನು ಯಾರು ಹೇಳಲು ಸಾಧ್ಯ ಹೇಳಿ. ಯುದ್ಧಕಾಲದಲ್ಲಿ ಮಾತ್ರವಲ್ಲ, ಪ್ರವಾಹ, ವಿಕೋಪ, ಧಂಗೆ ಅಲ್ಲದೇ ಶಾಂತಿಕಾಲದಲ್ಲೂ ಸೈನ್ಯದ ಬಳಕೆಯಾಗುವುದರಿಂದ, ಅವೂ Read more…


ಸೈನ್ಯ ಎಂಬುದೊಂದು ದೇಶದ ಹೆಮ್ಮೆ. ನಾವಿರುವ ಜಗತ್ತು ದೇಶವೊಂದರ ಶಕ್ತಿಯನ್ನು ಅದರ ಸೈನ್ಯದ ಗಾತ್ರ, ಶಸ್ತ್ರಗಳು, ಸೈನ್ಯದ ಶಿಸ್ತು, ಯುದ್ಧಗಳಲ್ಲಿ ಅದು ತೋರಿದ ಚಾಕಚಕ್ಯತೆ ಅಥವಾ ಸಾಹಸದ ಮೇಲೆ ಅಳೆಯುತ್ತದೆ. ಭಾರತೀಯ ಸೈನ್ಯ ಜಗತ್ತಿನ ಅತೀದೊಡ್ಡ ಸ್ವಯಂಪ್ರೇರಿತ ಸೈನ್ಯ. ಅಂದರೆ ದೇಶದಲ್ಲಿ ಯಾವ ರೀತಿಯ ಕಡ್ಡಾಯ ಸೇನಾಸೇವೆಯ ಸಾಂವಿಧಾನಿಕ ಅಗತ್ಯತೆ ಇಲ್ಲದೆಯೂ ಸಹ ತಾವಾಗಿಯೇ ಸ್ವ-ಇಚ್ಚೆಯಿಂದ Read more…


ನಮ್ಮಲ್ಲಿ ಹೆಚ್ಚಿನವರು ಕಾರ್ಪೊರೇಟ್ ಅಥವಾ ಖಾಸಗೀ ಕಂಪನಿಗಳ ಹೆಸರು ಕೇಳಿದ ಕೂಡಲೇ ಅದೇನೋ ಹಾವು ತುಳಿದವರಂತೆ ಆಡುವುದುಂಟು. ಕಾರ್ಪೊರೇಟುಗಳೆಂದರೆ ಬಡವರ ರಕ್ತಹೀರುವವರು, ತಮ್ಮ ಲಾಭವನ್ನಷ್ಟೇ ನೋಡಿಕೊಳ್ಳುವವರು, ಅಬಲರನ್ನು ತುಳಿಯುವವರು, ಕಾನೂನನ್ನು ತಮ್ಮ ಜೇಬಿನಲ್ಲಿಟ್ಟುಕೊಂಡು ಸರ್ಕಾರವನ್ನು ತಮ್ಮದಾಗಿಸಿಕೊಂಡು ತಮಗೆ ಬೇಕಾದದ್ದನ್ನೆಲ್ಲಾ ಮಾಡಿಕೊಳ್ಳುವವರು ಎಂಬ ನಂಬಿಕೆ ಇರುವವರೇ ಹೆಚ್ಚು. ಇದಕ್ಕೆ ಕಾರಣಗಳೂ ಇಲ್ಲದಿಲ್ಲ. ಭೋಪಾಲ್’ನಲ್ಲಿ ಅನಿಲ ಸೋರಿಕೆ ಮಾಡಿ Read more…