Thursday, 18 April, 2024

Tag: Advertisement


“ಜಗತ್ತು ಬದಲಾಗ್ತಿದೆ, ನಾವೂ ಬದಲಾಗಬೇಕು. ಇಲ್ಲಾಂದ್ರೆ ಹಿಂದುಳಿದು ಬಿಡ್ತೀವಿ” ಎನ್ನುವ ಮಾತನ್ನ ದೈನಂದಿನ ಜೀವನದಲ್ಲಿ ಹಲವು ಬಾರಿ ಕೇಳ್ತಾ ಇರ್ತೀವಿ. ಬಹಳಷ್ಟು ಸಲ ಇದು ನಿಜ ಕೂಡಾ. ಈಗಿನ ಜಗತ್ತು ಓಡುವ ವೇಗ ನೋಡಿದರೆ ಎಂತವರಿಗೂ ಒಂದುಸಲ ಹೆದರಿಕೆಯಾಗುತ್ತದೆ. ಇವತ್ತಿದ್ದ ತಂತ್ರಜ್ಞಾನ ನಾಳೆಯಿಲ್ಲ, ನಾವು ಮಾಡುವ ಕೆಲಸಗಳಲ್ಲೂ ಸಹ ಇವತ್ತಿದ್ದ ಪರಿಕಲ್ಪನೆ ಮುಂದಿನ ವರ್ಷ ಇರಲ್ಲ, Read more…


ಜಾಹೀರಾತುಗಳು ಉತ್ಪನ್ನಗಳನ್ನು ಮಾರುವುದು, ಕಂಪನಿಯ ಧ್ಯೇಯ ಸಾರುವುದು, ಸಾಮಾಜಿಕ ಸಂದೇಶಗಳನ್ನು ಕಳುಹಿಸುವುದಲ್ಲದೇ, ಎಷ್ಟೋಬಾರಿ ಕಂಪನಿಗಳನ್ನು ಉಳಿಸಿದ್ದೂ ಉಂಟು. ಉತ್ಪನ್ನಗಳ ಮಾರಾಟ ಕೆಳಗಿಳಿದು, ಕಂಪನಿಯೇ ಮುಳುಗುತ್ತಿದ್ದ ಪರಿಸ್ಥಿತಿಯಲ್ಲಿ ಬಿಡುಗಡೆಯಾದ ಆ ಒಂದು ಜಾಹೀರಾತು, ಇಡೀ ಕಂಪನಿಗೊಂದು ಹುಲ್ಲುಕಡ್ಡಿಯಾಗಿ ನಿಂತು ಅದನ್ನು ಬಚಾಯಿಸಿ ಮತ್ತೆ ಜೀವ ತುಂಬಿದ್ದಿದೆ. ಕೆಲವೊಮ್ಮೆ ಈ ಜಾಹೀರಾತುಗಳು ಉತ್ಪನ್ನದ ಮಾರುಕಟ್ಟೆ ಹೆಚ್ಚಿಸಿದ್ದಷ್ಟೇ ಅಲ್ಲ, ಕಂಪನಿಯ ಬಗ್ಗೆ ಜನರಿಗಿದ್ದ ಗ್ರಹಿಕೆಯನ್ನೇ ಬದಲಾಯಿಸಿ ಅದರ ಬ್ರಾಂಡ್ Read more…


ಜಾಹೀರಾತಿನ ಮುಖ್ಯ ಉದ್ದೇಶವೇ ಉತ್ಪನ್ನವನ್ನು ಮಾರುವುದಾದರೂ, ಹಲವಾರು ಬಾರಿ ಕಂಪನಿಗಳು ಈ ಮಾರಾಟದ ಮದ್ಯೆ ಸಂದೇಶಗಳನ್ನೂ ಸೇರಿಸಲು ಪ್ರಯತ್ನಪಡುವುದುಂಟು. ಇದೊಂದು ತೀರಾ ಸೂಕ್ಷ್ಮ ಪ್ರಕ್ರಿಯೆಯಾಗಿದ್ದು, ಈ ವಿಚಾರದಲ್ಲಿ ಎಲ್ಲಾ ಜಾಹೀರಾತುಗಳು ಸಫಲತೆ ಕಂಡಿದ್ದಿಲ್ಲ. ಹಾಗೆ ನೋಡಿದರೆ, ಈ ರೀತಿಯ ಜಾಹೀರಾತುಗಳು ಸಂದೇಶಕೊಟ್ಟು ಜನಪ್ರಿಯವಾದದ್ದಕ್ಕಿಂತಾ ಸೋಲುಕಂಡಿದ್ದೇ ಹೆಚ್ಚು. ಸಂದೇಶಕೊಡುವಲ್ಲಿ ವಿಫಲವಾದದ್ದು ಮಾತ್ರವಲ್ಲ, ಕೆಲವೊಮ್ಮೆ ತಪ್ಪುಸಂದೇಶ ಕೊಟ್ಟು, ವಿವಾದ Read more…


ಜಾಹೀರಾತುಗಳ ಮೂಲೋದ್ದೇಶ ಉತ್ಪನ್ನಗಳ ಮಾರಾಟವೇ ಆಗಿದ್ದರೂ, ಕಂಪನಿಗಳಿಗೆ ತಮ್ಮ ಮಾರುಕಟ್ಟೆಯನ್ನು ವಿಸ್ತರಿಸುವ ಇರಾದೆಯೇ ಇದ್ದರೂ, ಮನುಷ್ಯರು ಮಾಡುವ ಕೆಲಸಗಳಲ್ಲಿ ತಪ್ಪಾಗಲೇ ಬೇಕಲ್ಲ. ಮತ್ತು ಆಗಿದೆ ಕೂಡಾ. ಜಾಹೀರಾತುಗಳ ವಿಷಯದಲ್ಲಿ ನೂರಾರು ತಪ್ಪುಗಳಾಗಿವೆ. ಕೆಲವೆಡೆ ನಿಜಕ್ಕೂ ತಪ್ಪು ಸಂದೇಶವೇ ಹೋಗಿ, ಜನರು ಕೋಪಗೊಂಡಿದ್ದಾರೆ. ಕೆಲವೆಡೆ ಉತ್ಪನ್ನಗಳನ್ನೇ ಮಾರುಕಟ್ಟೆಯಿಂದ ಹಿಂಪಡೆಯಲಾಗಿದೆ, ಮತ್ತೆ ಕೆಲವೆಡೆ ಜಾಹೀರಾತಿನ ಸಂದೇಶ ತಪ್ಪು ಅರ್ಥಕ್ಕೆ ಎಡೆಮಾಡಿಕೊಟ್ಟು ನಿರ್ಧಿಷ್ಟ ಸಮುದಾಯಗಳು ಕಂಪನಿಗಳು Read more…


ಜಾಹೀರಾತುಗಳು ಯಾರಿಗೆ ತಾನೇ ಇಷ್ಟವಿಲ್ಲ. ಮಕ್ಕಳಿಗಂತೂ ಜಾಹೀರಾತುಗಳು ಬಲು ಇಷ್ಟ ಹೌದಾದರೂ, ಜಾಹೀರಾತುಗಳನ್ನು ಮೆಚ್ಚುವ ಮನಸೋಲುವ ವಯಸ್ಕರಿಗೂ ಏನು ಕಮ್ಮಿಯಿಲ್ಲ. ಬಣ್ಣದ ಬಣ್ಣದ ಮಾತುಗಳು, ಈಡೇರುತ್ತೋ ಇಲ್ಲವೋ ಆದರೂ ಚಂದಚಂದದ ಭರವಸೆಗಳು, ನಮ್ಮ ಪ್ರಾಡಕ್ಟನ್ನು ಬಳಸದೇ ಹೋದರೆ ನಿಮ್ಮ ಜೀವನವೇ ವ್ಯರ್ಥ, ನಮ್ಮ ಎದುರಾಳಿಯ ಉತ್ಪನ್ನವನ್ನು ಬಳಸುತ್ತಿದ್ದೀರ ಎಂದಾದಲ್ಲಿ ನೀವೆಂತ ಮೂರ್ಖರು, ನಿಮ್ಮ ಜೀವನವನ್ನೇ ಬದಲಾಯಿಸಿಕೊಳ್ಳೋಕೆ ನಾವು ಎಂತಹಾ ಒಳ್ಳೆಯ ಅವಕಾಶ ಕೊಡ್ತಾ Read more…


ಹದಿನೆಂಟನೇ ಶತಮಾನಕ್ಕೂ ಮೊದಲು ನಮಗೆ ಬದುಕುವ ರೀತಿಯನ್ನು ಕಲಿಯಲು ಶಾಲೆಗಳ ಅಗತ್ಯವೇ ಇರಲಿಲ್ಲ. ಜೀವನವೇ ಪಾಠಶಾಲೆಯಾಗಿತ್ತು. ಜ್ಞಾನಾರ್ಜನೆಗಾಗಿ ಗುರುಕುಲಗಳಿದ್ದವು. ಸಾಮಾನ್ಯಬದುಕನ್ನು ಬಿಟ್ಟು ಹೆಚ್ಚಿನ ಜ್ಞಾನಾಸಕ್ತಿಯಿದ್ದವರು, ವ್ಯಾಕರಣ ಅಥವಾ ಸಾಹಿತ್ಯಾಸಕ್ತರು, ತತ್ವಜ್ಞಾನದ ಹಿಂದೆಬಿದ್ದವರು ಮತ್ತು ಸ್ಥಿತಿವಂತರು ಗುರುಕುಲಗಳನ್ನು ಆಶ್ರಯಿಸುತ್ತಿದ್ದರು.  ಬ್ರಿಟೀಷರಿಗೆ ಭಾರತದ ಈ ಮಜಲನ್ನು ಅರ್ಥೈಸಿಕೊಳ್ಳಲು ಸಾಧ್ಯವೇ ಇರಲಿಲ್ಲ. ಚರ್ಚಿನಿಂದ ಕಲಿತದ್ದು ಮಾತ್ರವೇ ಜ್ಞಾನ ಅಥವಾ ಕಲಿಕೆ Read more…